Kshetra Samachara
Local News Subject:
ಮಂಗಳೂರು: ಭಾರಿ ಮಳೆಗೆ ರಸ್ತೆ ಜಲಮಯ; ಸುಗಮ ಸಂಚಾರಕ್ಕೆ ಮೇಯರ್ ನೆರವು
City:
Udupi
Mangalore
Category:
Nature
Body:
ಮಂಗಳೂರು: ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ದಿನವಿಡೀ ಭಾರಿ ಮಳೆ ಸುರಿಯಿತು.
ಜೋರು ಗಾಳಿ ಸಹಿತ ಬಿರುಮಳೆಯಿಂದಾಗಿ ನಗರದ ತಗ್ಗು ಪ್ರದೇಶದ ರಸ್ತೆಗಳು ಜಲಾವೃತಗೊಂಡವು. ಕೊಟ್ಟಾರಚೌಕಿ, ಮಾಲೆಮಾರ್, ಪಡೀಲ್, ಕುಳೂರು ಪ್ರದೇಶದ ರಸ್ತೆಗಳು ಕೆರೆಯಂತಾಯಿತು.
ಇದರಿಂದಾಗಿ ವಾಹನ ಸವಾರರು ಹೈರಾಣಾಗಿ ಹೋದ್ರು. ಕಿಲೋಮೀಟರ್ ಗಟ್ಟಲೆ ವಾಹನಗಳ ಸಾಲು ನಿಂತ ದೃಶ್ಯ ಕಂಡು ಬಂತು. ಈ ಸಂದರ್ಭ ರಸ್ತೆ ಸಂಚಾರ ಸುಗಮಗೊಳಿಸಲು ಸ್ವತಃ ಮೇಯರ್ ಪ್ರೇಮಾನಂದ ಶೆಟ್ಟಿಯವರೇ ಮಳೆಯಲ್ಲಿ ಫೀಲ್ಡ್ ಗಿಳಿದು ಶ್ರಮ ಪಡುತ್ತಿರುವುದು ಗಮನ ಸೆಳೆಯಿತು.
Reach Count:
7969
Show Detail Screen Advertisement:
Yes