Public News

News Subject: 
ಮೀಸಲಾತಿಗಾಗಿ ಅಕ್ಟೋಬರ್ 1 ರಿಂದ ಮತ್ತೆ ಧರಣಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ
Top News Rank: 
1
Is Sensitive: 
No
Is Special NEWS: 
0
Send Notification: 
0
Body: 

ಕೊಡಗು : 2ಎ ಮೀಸಲಾತಿ ಈಡೇರದಿದ್ದರೆ ಅಕ್ಟೋಬರ್ 1 ರಿಂದ ಮತ್ತೆ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸರ್ಕಾರವನ್ನು ಎಚ್ಚರಿಸಿದ್ದಾರೆ.

2ಎ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟದ ಭಾಗವಾಗಿ ಕೊಡಗಿನ ಕೊಡ್ಲಿಪೇಟೆಯಲ್ಲಿ ನಡೆದ ಅಭಿಯಾನದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಅಕ್ಟೋಬರ್ 1 ರಂದು ಮಾಜಿ ಸಿಎಂ ಜೆಎಚ್ ಪಟೇಲ್ ಅವರ ಜನ್ಮದಿನವಿದೆ. ಅವರ ಜನ್ಮದಿನ ಬೆಂಗಳೂರಿನಲ್ಲಿ ಆಚರಿಸಿ, ಅದೇ ವೇದಿಕೆಯಲ್ಲಿ ಧರಣಿ ಆರಂಭಿಸಲಾಗುವುದು ಎಂದರು.

ಈಗಾಗಲೇ ಎಲ್ಲಾ ಜಿಲ್ಲೆಗಳಲ್ಲೂ ನಮ್ಮ ಹೋರಾಟ, ಅಭಿಯಾನ ನಡೆಯುತ್ತಿರುವುದು ಸರ್ಕಾರಕ್ಕೆ ಗೊತ್ತಿದೆ. ಧರಣಿ ಆರಂಭ ಆಗುವವರೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಅವಕಾಶ ನೀಡಲ್ಲ ಎಂದುಕೊಂಡಿದ್ದೇವೆ. ಹೀಗಾಗಿ ನಮ್ಮ ಬೇಡಿಕೆ ಈಡೇರುವ ವಿಶ್ವಾಸವಿದೆ ಎಂದಿದ್ದಾರೆ.

ಹಿಂದಿನ ಹೋರಾಟ ಆದಾಗ ಮಾಜಿ ಸಿಎಂ ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದರು. ಅವರು ನಮಗೆ ಆರು ತಿಂಗಳ ಸಮಯಾವಕಾಶ ನೀಡುವಂತೆ ಕೇಳಿಕೊಂಡಿದ್ದರು. ಇದೀಗ ಸಿಎಂ ಬದಲಾಗಿರಬಹುದು. ಆದರೆ ಅವರದೇ ಪಕ್ಷದ ಬಸವರಾಜ ಬೊಮ್ಮಾಯಿ ಅವರು ಅಧಿಕಾರದಲ್ಲಿದ್ದಾರೆ . ಅವರು ನಮ್ಮ ಮನವಿಯನ್ನು ಸ್ವೀಕರಿಸಿ ಬೇಡಿಕೆ ಈಡೇರಿಸುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Upload Image: 
PublicNext--588084--node-nid
Category: 
Religion
Reach Count: 
19487
State: 
Karnataka
Show Detail Screen Advertisement: 
Yes
SEO Keywords: 
jaya-mruthyunjaya-swamiji-warns-if-the-2a-reservation-demand-is-not-met-will-start-protest-from-oct-1,,Religion