Kshetra Samachara

  • Posted on: 29 August 2021
  • By: nirmala.aralikatti
Local News Subject: 
ಕಟೀಲು: ಎಲೆಯಲ್ಲಿ ಬಿಡಿಸಿದ ಶ್ರೀ ದೇವಿಯ ಭಾವಚಿತ್ರ ದೇವಸ್ಥಾನಕ್ಕೆ ಸಮರ್ಪಣೆ
City: 
Udupi
Mangalore
Upload Image: 
PublicNext--588062--node-nid
Body: 

ಮುಲ್ಕಿ:ಪಕ್ಷಿಕೆರೆಯ ಪ್ರತಾಪಾಚಾರ್ಯ ರವರು ಹಲಸಿನ ಎಲೆಯಲ್ಲಿ‌ ಕಟೀಲಿನ ಆರಾಧ್ಯಮೂರ್ತಿ ಶ್ರೀ ದುರ್ಗಾಪರಮೇಶ್ವರಿಯ ಭಾವಚಿತ್ರವನ್ನು ಚಿತ್ರಿಸಿ ಶೋಣ ಶುಕ್ರವಾರದಂದು ಕಟೀಲು ದೇವಸ್ಥಾನಕ್ಕೆ ತಂದು ದೇವಿಗೆ ಒಪ್ಪಿಸಿದ್ದಾರೆ. ಈ ಸಂದರ್ಭ ಕಟೀಲು ಕ್ಷೇತ್ರದ ಆರ್ಚಕ ಅನಂತಪದ್ಮನಾಭ ಆಸ್ರಣ್ಣ ಮಾತನಾಡಿ ಎಲೆಯಲ್ಲಿ ರಚಿಸಿದ ಕಟೀಲು ಶ್ರೀದೇವಿಯ ಭಾವಚಿತ್ರವನ್ನು ಶ್ರೀದುರ್ಗಾಪರಮೇಶ್ವರೀ ಪದವಿಪೂರ್ವಕಾಲೇಜಿನ ವಸ್ತುಸಂಗ್ರಹಾಲಯದಲ್ಲಿ‌ ಇಡಲಾಗುವುದು. ಪ್ರತಾಪಾಚಾರ್ಯರು ಕಟೀಲು ಶಿಕ್ಷಣಸಂಸ್ಥೆಯ ಹಳೆವಿದ್ಯಾರ್ಥಿಯಾಗಿರುವುದು ಉಲ್ಲೇಖನೀಯ. ಎಂದರು.

ಈ ಸಂದರ್ಭ ಕಲಾಕಾರ ಪ್ರತಾಪ್ ಆಚಾರ್ಯನನ್ನು ಶ್ರೀದೇವಿಯ ಶೇಷವಸ್ತ್ರ ನೀಡಿ ಗೌರವಿಸಲಾಯಿತು.ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಸದಾನಂದ ವೆಂಕಟೇಶ ಆಸ್ರಣ್ಣ, ಶ್ರೀಕರ ಆಸ್ರಣ್ಣ ಉಪಸ್ಥಿತರಿದ್ದರು .

Category: 
Cultural Activity
Reach Count: 
2267
Show Detail Screen Advertisement: 
Yes
Is Special NEWS: 
0
Is Sensitive: 
No
stringers: 
Punith Mulki
SEO Keywords: 
Ketila: A portrait of Sri Devi painted on a leaf dedicated to the temple,Udupi,Mangalore,Cultural-Activity