Public News
News Subject:
ಸಂದರ್ಭ ಬಂದ್ರೆ ಇದ್ದಲಿಗೆ ಹೋಗಿ ಬಗ್ಗುಬಡೆಯುತ್ತೇವೆ : ಪಾಕ್ ಗೆ ರಾಜನಾಥ್ ಸಿಂಗ್ ಎಚ್ಚರಿಕೆ
Upload Image:
Category:
Government
Body:
ಊಟಿ (ತಮಿಳುನಾಡು) : ಭಾರತವನ್ನು ಗುರಿಯಾಗಿಸಿಕೊಂಡು ಉಗ್ರರಿಗೆ ತರಬೇತಿ, ಹಣ, ಶಸ್ತ್ರಾಸ್ತ್ರ ಪೂರೈಸುತ್ತಿರುವ ಪಾಕಿಸ್ತಾನದ ವಿರುದ್ಧ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಿಡಿಕಾರಿದ್ದಾರೆ. ತಮಿಳುನಾಡಿನ ವೆಲ್ಲಿಂಗ್ಟನ್ ನ ಡಿಫೆನ್ಸ್ ಸರ್ವಿಸ್ ಸ್ಟಾಫ್ ಕಾಲೇಜಿನಲ್ಲಿ ಮಾತನಾಡಿದ ಅವರು, ನಮ್ಮ ಗಡಿಯಲ್ಲಿನ ಸವಾಲುಗಳನ್ನು ಹೊರತಪಡಿಸಿ, ಭಾರತದ ರಾಷ್ಟ್ರೀಯ ಭದ್ರತೆಯಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಲ್ಲ ಎಂದು ಹೇಳಿದ್ದಾರೆ.
ಭಾರತದ ವಿರುದ್ಧ ಎರಡು ಯುದ್ಧಗಳನ್ನು ಸೋತ ಬಳಿಕ ಪಾಕಿಸ್ತಾನ ಛಾಯಾ ಸಮರಕ್ಕೆ ಮುಂದಾಗಿದ್ದು, ಭಯೋತ್ಪಾದನೆಯನ್ನು ತನ್ನ ರಾಷ್ಟ್ರೀಯ ನೀತಿಯಲ್ಲಿ ಅಳವಡಿಸಿಕೊಂಡಿದೆ. ಎಂದು ಕಿಡಿಕಾರಿದರು. ಇನ್ನು, ಭಾರತ ಕೇವಲ ತನ್ನ ನೆಲದಲ್ಲಿ ಮಾತ್ರ ಭಯೋತ್ಪಾದನೆಯನ್ನು ಅಂತ್ಯಗೊಳಿಸುವುದಿಲ್ಲ. ಅವಶ್ಯಕತೆ ಬಿದ್ದರೆ ಅವರ (ಪಾಕಿಸ್ತಾನದ) ನೆಲದಲ್ಲಿಯೂ ಕಾರ್ಯಾಚರಣೆ ನಡೆಸಿ ಭಯೋತ್ಪಾದರನ್ನು ಹೊಡೆದುರುಳಿಸುತ್ತೇವೆ. ಈ ಮೂಲಕ ನಮ್ಮ ಸಾಮರ್ಥ್ಯವನ್ನು ಮತ್ತಷ್ಟು ವೃದ್ಧಿಸಿಕೊಳ್ಳುತ್ತೇವೆ ಎಂಬ ಎಚ್ಚರಿಕೆ ರವಾನಿಸಿದ್ದಾರೆ.
Reach Count:
27388
Show Detail Screen Advertisement:
Yes