Kshetra Samachara
ಅಣ್ಣಿಗೇರಿ : ಪಟ್ಟಣದ ಮಣಕವಾಡ ರಸ್ತೆಯಲ್ಲಿರುವ ಹೊಲಗಳಿಗೆ ಹೋಗಲು ಸರಿಯಾದ ರಸ್ತೆ ಇಲ್ಲದೆ ರೈತರು ಪರದಾಡುವ ಸ್ಥಿತಿ ಉದ್ಭವವಾಗಿತ್ತು. ಈ ಕುರಿತು ಶಾಸಕರಿಗೆ ಹಲವಾರು ಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಸ್ಥಳೀಯ ರೈತರು ಆರೋಪಿಸಿದರು.
ಪಟ್ಟಣದಲ್ಲಿ ಮುಂಗಾರು ಹಂಗಾಮು ಜೋರಾಗಿದ್ದರಿಂದ ಹೊಲಗಳಿಗೆ ಹೋಗಲು ಸರಿಯಾದ ರಸ್ತೆ ಇಲ್ಲದ್ದನ್ನು ಕಂಡು ಅಲ್ಲಿನ ಎಲ್ಲ ಹೊಲದ ಮಾಲೀಕರು ವಂತಿಗೆಯನ್ನು ಸಂಗ್ರಹಿಸಿ ಸುಮಾರು ಐವತ್ತಕ್ಕೂ ಹೆಚ್ಚು ಟ್ರ್ಯಾಕ್ಟರ್ ಗರಸನ್ನು ಹಾಕಿ ರಸ್ತೆ ಸುಧಾರಣೆ ಮಾಡಿಕೊಂಡರು. ಈ ಮೊದಲಿದ್ದ ರಸ್ತೆಯಲ್ಲಿ ಎತ್ತು ಚಕ್ಕಡಿ ಹಾಗೂ ಟ್ರ್ಯಾಕ್ಟರ್ ಗಳು ಹೊಲಗಳಿಗೆ ಹೋಗಬೇಕಾದರೆ ತುಂಬಾ ಹರಸಾಹಸ ಪಡುತ್ತಿದ್ದವು.
ಇಂದು ಎಲ್ಲ ರೈತರು ಸೇರಿಕೊಂಡು ಈ ರಸ್ತೆಗೆ ಸುಮಾರು ಐವತ್ತಕ್ಕೂ ಹೆಚ್ಚು ಟ್ರ್ಯಾಕ್ಟರ್ ಗರಸು ಹಾಕಿ ಸಂಪೂರ್ಣವಾಗಿ ದುರಸ್ತಿ ಮಾಡಿ ಹೊಲಗಳಿಗೆ ಹೋಗಲು ಸುಸಜ್ಜಿತ ರಸ್ತೆ ನಿರ್ಮಿಸಿದರು. ಈ ಸಂದರ್ಭದಲ್ಲಿ ರೈತರಾದ ಬಸವರಾಜ ಕೋಳಿವಾಡ , ಹಸನ್ ಸಾಬ್ ಗಡ್ಡದ, ಚನಬಸಪ್ಪ ನರಗುಂದ, ಅಮೀನ್ ಸಾಬ್ ನಡಕಟ್ಟಿನ , ಫಕ್ಕಿರಪ್ಪ ಶ್ಯಾನಬೋಗರ, ದೇವರಡ್ಡಿ ಬಿರಸಲ ಸೇರಿದಂತೆ ಮೊದಲಾದ ರೈತರು ಉಪಸ್ಥಿತರಿದ್ದರು .