Kshetra Samachara
Local News Subject:
ಧಾರವಾಡ: ಮನೆಯಲ್ಲಿ ಮತಾಂತರ ಆರೋಪ! ಮನೆಗೆ ದಾಳಿ ಮಾಡಿದ ಭಜರಂಗ ದಳ
City:
Hubballi-Dharwad
Video Thumbnail:
Category:
Crime
Body:
ಧಾರವಾಡ: ಮನೆಯೊಂದರಲ್ಲಿ ನಡೆಯುತ್ತಿದ್ದ ಪ್ರಾರ್ಥನೆ, ಮೂಲಕ ಮತಾಂತರ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿ ಭಜರಂಗ ದಳ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ಧಾರವಾಡ ಜಿಲ್ಲೆಯ ಅಳ್ನಾವರದ ಹಳಿಯಾಳ ರಸ್ತೆಯ ದಯಾಸಾಗರ ನಿವಾಸದಲ್ಲಿ ನಡೆದಿದೆ.
ಅಳ್ನಾವರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಹಿಂದೂಗಳು ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು, ಹಿಂದೂಗಳನ್ನು ಸೇರಿಸಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸುತ್ತಿದ್ದ ಆರೋಪದ ಹಿನ್ನಲೆ ಭಜರಂಗ ದಳ ಕಾರ್ಯಕರ್ತರಿಂದ ದಾಳಿ ನಡೆಸಿ ಪ್ರಾರ್ಥನೆ ತಡೆದು ಎಲ್ಲರನ್ನೂ ವಾಪಸ್ ಕಳುಹಿಸಿದ್ದಾರೆ. ಇತ್ತೀಚೆಗೆ ಮತಾಂತರಗೊಂಡಿರೋ ಕೆಲವರಿಂದ ಪ್ರಾರ್ಥನೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
Reach Count:
42707
Show Detail Screen Advertisement:
Yes