Kshetra Samachara
ಬಜಪೆ : ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ಬ್ರಿ0ಡೇಲು ಎಂಬಲ್ಲಿ ಸ್ಥಾಪನೆಯಾಗುತ್ತಿರುವ ಒಣ ಕಸ ಸಂಸ್ಕರಣಾ ಘಟಕ(ಎಂ ಆರ್ ಎಫ್ )ದ ವಿರುದ್ದ ಸ್ಥಳೀಯರಿಂದ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಮನೋಹರ್ ಶೆಟ್ಟಿ ನಂದಿಕಂಬಳ ಅವರು ಸ್ಥಳೀಯರ ವಿರೋದದ ನಡುವೆಯೂ ಘಟಕ ಸ್ಥಾಪನೆಗೆ ಮುಂದಾಗುತ್ತಿದೆ.
ಘಟಕ ಈ ವ್ಯಾಪ್ತಿ ಗೆ ಬರುದಕ್ಕಿಂತ ಮೊದಲು ಶಾಸಕರ ನೇತೃತ್ವದಲ್ಲಿ ಸಭೆಯನ್ನು ಕರೆದು ಸ್ಥಳೀಯರಿಗೆ ಘಟಕದ ಬಗ್ಗೆ ಮನವರಿಕೆಯನ್ನು ಮಾಡಬಹುದಾಗಿತ್ತು. ಸ್ಥಳೀಯರು ಈ ಬಗ್ಗೆ ವಿರೋಧವನ್ನು ಕೂಡ ವ್ಯಕ್ತಪಡಿಸಿದ್ದರು.ಆದರೆ ಯಾವುದೇ ಮಾಹಿತಿಯನ್ನು ನೀಡದೆ ಘಟಕದ ಸ್ಥಾಪನೆಗೆ ಮುಂದಾಗಿದೆ.ಈ ಬಗ್ಗೆ ಸಂಬಂಧಪಟ್ಟ ಜಿ.ಪಂ,ತಾ.ಪಂ ಹಾಗೂ ಗ್ರಾ.ಪಂ ಮನವಿಯನ್ನು ಕೂಡ ನೀಡಲಾಗಿದೆ. ಎಂದು ಅವರು ಹೇಳಿದರು.
ಪ್ರತಿಭಟನೆಯಲ್ಲಿ ಕುಪ್ಪೆಪದವು ಗ್ರಾಮ ಪಂಚಾಯತ್ ಅಧ್ಯಕ್ಷ ಡಿ.ಪಿ. ಹಮ್ಮಬ್ಬ ,ಜಯಚಂದ್ರ ಭಟ್, ನಾರಾಯಣ ಪೂಜಾರಿ, ನಾಗೇಶ್ ಕೊರ್ಡೆಲ್, ಶ್ರೀಧರ್ ಶೆಟ್ಟಿ ಬ್ರಿ0ಡೇಲು, ಸುರೇಶ್ ಬ್ರಿ0ಡೇಲು ಮತ್ತು ಸ್ಥಳೀಯರು ಭಾಗವಹಿಸಿದ್ದರು.