Kshetra Samachara
Local News Subject:
ಕಿನ್ನಿಗೋಳಿ: ಬಾರಿ ಮಳೆಗಾಳಿಗೆ ರಸ್ತೆಗೆ ಬಿದ್ದ ಮರ ಸಂಚಾರ ಬಂದ್, ಸ್ಥಳೀಯರಿಂದ ತೆರವು
City:
Udupi
Mangalore
Video Thumbnail:
Category:
Nature
Body:
ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯ ಕಿನ್ನಿಗೋಳಿ ಪರಿಸರದಲ್ಲಿ ಭಾನುವಾರ ಮುಂಜಾನೆ ಬೀಸಿದ ಜೋರು ಗಾಳಿ ಮಳೆಗೆ ಕಿನ್ನಿಗೋಳಿ ಸಮೀಪದ ದಾಮಸ್ಕಟ್ಟೆ ಯ ಎಸ್ ವಿ ಡಿ ಬಳಿ ಬ್ರಹತ್ ಆಕಾರದ ಮರ ಬಿದ್ದು ಥಾಮಸ್ಕಟ್ಟೆ ಏಳಿಂಜೆ ಮಾರ್ಗ ವಾಹನ ಸಂಚಾರ ಸ್ಥಗಿತಗೊಂಡಿತ್ತು
ಈ ಸಂದರ್ಭ ಕೂಡಲೇ ಸ್ಥಳಕ್ಕೆ ವಹಿಸಿದ ಕಿನ್ನಿಗೋಳಿ ವಲಯದ ಅರಣ್ಯ ಇಲಾಖೆಯವರು , ಮೆಸ್ಕಾಂ ಅಧಿಕಾರಿಗಳು,ಎಸ್ ವಿಡಿ ಸಂಘಟನೆಯ ಸಿಬ್ಬಂದಿಗಳು,ದಾಮಸ್ಕಟ್ಟೆ ಇಗರ್ಜಿಯ ಸಂಸ್ಥೆಯವರು ಹಾಗೂ ಗ್ರಾಮಸ್ಥರು ಸೇರಿ ಬೃಹದಾಕಾರದ ಮರ ತೆರವುಗೊಳಿಸಲು ಸಹಕಾರ ನೀಡಿದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ರಾಜು, ಮೆಸ್ಕಾಂ ಇಲಾಖೆಯ ಬಸವರಾಜು, ಕಟೀಲು ಎಕ್ಕಾರು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಸ್ಟ್ಯಾನಿ ಪಿಂಟೋ, ಕಿನ್ನಿಗೋಳಿ ಗ್ರಾಪಂ ಮಾಜಿ ಸದಸ್ಯ ಸಂತಾನ್ ಡಿಸೋಜ,ಐಕಳ ಗ್ರಾ ಪಂ ಸದಸ್ಯ ಪ್ರಕಾಶ್ ಶೆಟ್ಟಿ ನಂದನ ಮನೆ ಹಾಗೂ ಗ್ರಾಮಸ್ಥರು ಮರ ತೆರವುಗೊಳಿಸಿದ್ದಾರೆ
Reach Count:
4254
Show Detail Screen Advertisement:
Yes