Public News
ವಿಜಯವಾಡ: ಪೊಲೀಸ್ ಕಾನ್ಸ್ಟೇಬಲ್ ಓರ್ವ ತನ್ನ ಪತ್ನಿಯನ್ನು ಅಟ್ಟಾಡಿಸಿ ಹೊಡೆದ ಅಮಾನವೀಯ ಘಟನೆ ಆಂಧ್ರ ಪ್ರದೇಶದ ಕಂಚಿಕಚರ್ಲ ವಲಯದ ಕೀಸರ ಗ್ರಾಮದಲ್ಲಿ ನಡೆದಿದೆ.
ಕೀಸರ ಗ್ರಾಮದ ನಿವಾಸಿ ಸುನೀಲ್ ಕ್ರೌರ್ಯ ಮೆರೆದ ಆರೋಪಿ. ಸುನೀಲ್ ತಾಯಿ ಇತ್ತೀಚೆಗೆ ಆಡಳಿತಾರೂಢ ಪಕ್ಷದಿಂದ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ಕೌಟುಂಬಿಕ ವಿಚಾರವಾಗಿ ಪತ್ನಿ ನವ್ಯಾ ಮತ್ತು ಸುನೀಲ್ ನಡುವೆ ಆಗಾಗ ಆಗುತ್ತಿತ್ತು. ಶನಿವಾರವೂ ಇಬ್ಬರ ಮಧ್ಯೆ ಉಂಟಾದ ಜಗಳವಾಗಿದ್ದು, ಸುನೀಲ್ ತನ್ನ ಪತ್ನಿ ನವ್ಯಾರನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾನೆ.
ಗಂಭಿರವಾಗಿ ಗಾಯಗೊಂಡ ನವ್ಯಾರನ್ನು ಸಂಬಂಧಿಕರು ನಂದಿಗಾಮ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆ ವೇಳೆ ನವ್ಯಾ ವಿಡಿಯೋ ಮೂಲಕ ತನ್ನ ನೋವನ್ನು ತೋಡಿಕೊಂಡಿದ್ದಾರೆ. ಗಂಡ ಹಲ್ಲೆ ಮಾಡಲು ಅತ್ತೆಯೇ ಪ್ರಚೋದನೆ ನೀಡಿದರು. ಪತಿಗೆ ಜೋಗಯ್ಯಪೇಟೆ ಮೂಲದ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿದೆ. ಇಬ್ಬರ ಸಂಬಂಧಕ್ಕೆ ನಾನು ಅಡ್ಡಿಯಾಗಿರುವುದರಿಂದ ಮೊದಲ ನನ್ನನ್ನು ಕೊಲೆ ಮಾಡಲು ಪ್ರಯತ್ನಿಸಿದ್ದಾರೆಂದು ದೂರಿದ್ದಾಳೆ. ಇದೀಗ ಸುನೀಲ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.