Kshetra Samachara

Local News Subject: 
ಮುಲ್ಕಿ: ಬೆಳಗ್ಗೆ ಖರೀದಿ ಭರಾಟೆ; ಸಂಜೆ ಗಾಳಿ- ಮಳೆ ಆರ್ಭಟ; 6 ಪಾಸಿಟಿವ್
City: 
Udupi
Mangalore
Video Thumbnail: 
PublicNext--513294--node-nid
Category: 
Nature
Body: 

ಮುಲ್ಕಿ: ಮುಲ್ಕಿ ತಾಲೂಕಿನಲ್ಲಿ ಇಂದು ಬೆಳಗ್ಗೆ 6ರಿಂದ 10ರ ವರೆಗೆ ತುಂತುರು ಮಳೆ ನಡುವೆ ವ್ಯಾಪಾರ ಜೋರಾಗಿಯೇ ನಡೆದಿದೆ.
ಸಂಜೆ ಮಾತ್ರ ಬಿರುಸಿನ ಮಳೆ ಜೊತೆಗೆ ಜೋರುಗಾಳಿ ಬೀಸಿದ್ದು, ಕೆಲವೆಡೆ ಹಾನಿ ಉಂಟಾಗಿದೆ.

ಭಾರಿ ಗಾಳಿ- ಮಳೆಗೆ ಬಸ್ ನಿಲ್ದಾಣದ ಪರಿಸರದ ಪೆಟ್ರೋಲ್ ಬಂಕ್ ಬಳಿಯ ಪುನರೂರು ವಿಶ್ವನಾಥ ರಾವ್ ಮಾಲೀಕತ್ವದ ಏರ್ ನೆಟ್ ಟವರ್ ಗೆ ಹಾನಿಯಾಗಿದೆ.

ಮುಲ್ಕಿ ನಪಂ ವ್ಯಾಪ್ತಿಯ ಕೊಳಚಿಕಂಬಳ ರಸ್ತೆಯಲ್ಲಿ ತೇಗದ ಮರ ಬಿದ್ದು ಎರಡು ವಿದ್ಯುತ್ ಕಂಬಗಳಿಗೆ ಹಾನಿ ಯಾಗಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು. ಸ್ಥಳಕ್ಕೆ ಮುಲ್ಕಿ ನ.ಪಂ. ಸದಸ್ಯ ಸತೀಶ್ ಅಂಚನ್, ಸಿಬ್ಬಂದಿ ಪ್ರಕಾಶ್ ನವೀನ್ ಚಂದ್ರ ಮತ್ತಿತರರು ಧಾವಿಸಿ, ಪರಿಹಾರ ಕಾರ್ಯ ನಡೆಸಿದರು.

ಹಳೆಯಂಗಡಿ ಜಂಕ್ಷನ್ ಬಳಿ ತೆಂಗಿನ ಮರ ಬಿದ್ದು ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ. ಮುಲ್ಕಿ ರೈಲ್ವೆ ನಿಲ್ದಾಣ ಸಮೀಪ ಅಕೇಶಿಯಾ ಮರ ಬಿದ್ದು ಟ್ರಾನ್ಸ್ ಫಾರ್ಮರ್ ಸಹಿತ 8 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಪಕ್ಷಿಕೆರೆ ಸಮೀಪದ ಪಂಜ ಬಳಿ ಮರ ಬಿದ್ದು ಏಳು ವಿದ್ಯುತ್ ಕಂಬಗಳಿಗೆ ಹಾನಿಯಾಗಿ, ವಿದ್ಯುತ್ ವ್ಯತ್ಯಯಗೊಂಡಿದೆ.

ಇಂದು ಮುಲ್ಕಿ ತಾಲೂಕಿನ ಬಪ್ಪನಾಡಿನಲ್ಲಿ 2, ಕೊಂಡೆಮೂಲದಲ್ಲಿ 1, ಮೆನ್ನಬೆಟ್ಟಿನಲ್ಲಿ 3 ಸಹಿತ ಒಟ್ಟು 6 ಪಾಸಿಟಿವ್ ಪ್ರಕರಣ ದಾಖಲಾಗಿದೆ.

Reach Count: 
15217