Kshetra Samachara
ಕುಂದಗೋಳ : ಪಟ್ಟಣ ಪಂಚಾಯಿತಿ ತ್ಯಾಜ್ಯ ವಿಲೇವಾರಿ ಘಟಕ ಎದುರಿನ ರಸ್ತೆ ಪಕ್ಕದಲ್ಲಿ ಯಾವುದೋ ಆಸ್ಪತ್ರೆಯಲ್ಲಿ ಬಳಸಿ ಬಿಸಾಡಿದ ಬೆಡ್, ಇಂಜೆಕ್ಷನ್ ಸಿರೀಂಜ್, ಇಂಜೆಕ್ಷನ್ ಟ್ಯೂಬ್, ಗುಕ್ಲೋಸ್ ಬಾಟಲಿ'ಗಳನ್ನು ಎಸೆದು ಹೋಗಿದ್ದು ಇದರಿಂದ ರೈತಾಪಿ ಹೊಲಗಳ ಚಟುವಟಿಕೆ ಜೊತೆ ದನ ಕರು ಹದ್ದುಗಳು ಈ ತ್ಯಾಜ್ಯ ತಿದ್ದು ಜಮೀನುಗಳಲ್ಲಿ ಕಸ ಹರಡುವ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರಿಸಿತ್ತು.
ಈ ವರದಿ ಪ್ರಕಟಗೊಂಡ ಎರಡೇ ದಿನಗಳಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಪೌರ ಕಾರ್ಮಿಕರ ಮೂಲಕ ಜೆಸಿಬಿ ಯಂತ್ರ ಬಳಸಿ ರಸ್ತೆ ಬದಿ ಹಾಕಲಾಗಿದ್ದ ತ್ಯಾಜ್ಯ ಸ್ವಚ್ಚಗೊಳಿಸಿ, ರೈತಾಪಿ ಜನರ ಕಷ್ಟ ಹಾಗೂ ದನ ಕರುಗಳು ಅಪಾಯಕ್ಕೆ ಇಡಾಗುತ್ತಿದ್ದ ಸಂದರ್ಭ ತಪ್ಪಿಸಿದ್ದು ಇನ್ಮುಂದೆ ತ್ಯಾಜ್ಯ ವಿಲೇವಾರಿ ಘಟಕದ ರಸ್ತೆ ಪಕ್ಕ ಕಸ ಸುರಿದ್ರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ವರದಿ ಗಮನಿಸಿ ಸೂಕ್ತ ಕ್ರಮ ಕೈಗೊಂಡ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಅಧ್ಯಕ್ಷ ಸದಸ್ಯರ ಬಗ್ಗೆ ರೈತಾಪಿ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್