Kshetra Samachara
Local News Subject:
ಬ್ರಹ್ಮಾವರ: ರೋಹಿನಿ ಸಿಂಧೂರಿಯಿಂದ ಮುಜರಾಯಿ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿಸುವೆ; ಸಚಿವ ಕೋಟ
City:
Udupi
Mangalore
Category:
Politics
Body:
ಬ್ರಹ್ಮಾವರ: ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ರೋಹಿನಿ ಸಿಂಧೂರಿ ಅವರನ್ನು ಸಾಕಷ್ಟು ವಿವಾದದ ನಂತರ ಹಿಂದೂ ಧಾರ್ಮಿಕ ದತ್ತಿ ಮುಜರಾಯಿ ಇಲಾಖೆ ಆಯುಕ್ತರನ್ನಾಗಿ ನೇಮಿಸಲಾಗಿದೆ. ಈ ಕುರಿತು ಶನಿವಾರ ಉಡುಪಿ ಜಿಲ್ಲೆ ಕೋಟದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, "ಅಧಿಕಾರಿ ಯಾರೇ ಆಗಿದ್ದರು ಅವರಿಂದ ಉತ್ತಮ ಕೆಲಸಗಳನ್ನು ಮಾಡಿಸಿಕೊಳ್ಳಬೇಕಾಗಿರುವುದು ಸಚಿವರ ಕರ್ತವ್ಯವಾಗಿದೆ.
ಅದೇ ರೀತಿ ರೋಹಿನಿ ಸಿಂಧೂರಿ ಅವರು ನನ್ನ ಇಲಾಖೆಯ ಆಡಳಿತ ಮುಖ್ಯಸ್ಥೆಯಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಎಷ್ಟೇ ವಿವಾದಗಳಾಗಿದ್ದರೂ ನನ್ನ ಇಲಾಖೆಯಲ್ಲಿ ಅವರಿಂದ ಉತ್ತಮ ಕೆಲಸ ಮಾಡಿಸಿಕೊಳ್ಳುತ್ತೇನೆ ಎನ್ನುವ ಭರವಸೆ ಇದೆ. ನನ್ನ ಮೇಲಿನ ಭರವಸೆ ಇಂದಲೇ ಮುಖ್ಯಮಂತ್ರಿಗಳು ನಮ್ಮ ಇಲಾಖೆಗೆ ನೇಮಿಸಿಸಿದ್ದಾರೆ" ಎಂದರು.
Reach Count:
9481