Public News
ಬೆಳಗಾವಿ- ಮೂಡಲಗಿ ಪಟ್ಟಣದಲ್ಲಿ ಮೇ. 23ರಂದು ಶ್ರೀಕಾಂತ ಶಂಕರ ನಾಯಕ (21) ಎಂಬಾತ ಅಪ್ರಾಪ್ತೆಯೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದ ವಿಡಿಯೋ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಈ ಯುವಕ ಹಿಂಡಲಗಾ ಜೈಲು ಪಾಲಾಗಿ 15 ದಿನಗಳ ಕಳೆಯುವ ಮುಂಚೆಯೇ ಆ ಅಪ್ರಾಪ್ತೆ ಸಾವನ್ನಪ್ಪಿದ್ದಾಳೆ.
ಮೂಡಲಗಿಯ ಶೃತಿ (17) ಎಂಬಾಕೆ ಮೃತ ದುರ್ದೈವಿ. ಈಕೆ ಗುರುವಾರ ರಾತ್ರಿ ಮನೆಯಿಂದ ಹೊರಗೆ ಹೋಗಿ ಶವವಾಗಿ ಪತ್ತೆಯಾಗಿದ್ದಾಳೆ ಎಂಬ ಮಾತು ಹರಿದಾಡುತ್ತಿರುವ ಹಿನ್ನಲೆ, ಪೊಲೀಸ್ ಅಧಿಕಾರಿಗಳು ಕೆಲವು ಸ್ಥಳದಲ್ಲಿ ಪರಿಶೀಲನೆ ನಡೆಸಿದರು.
ಆದರೆ ಆಕೆಯ ಶವ ಶುಕ್ರವಾರ ಬೆಳಗ್ಗೆ ಕುಲಗೋಡ ಪೊಲೀಸ್ ಠಾಣೆಯ ವ್ಯಾಪ್ತಿಯ ಸುಣಧೋಳಿ ಸೇತುವೆ ಬಳಿ ಪತ್ತೆಯಾಗಿದೆ.
ಅಪ್ರಾಪ್ತೆ ಸಾವಿಗೆ ದೈಹಿಕ ಸಂಪರ್ಕ ಹೊಂದಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಕಾರಣಕ್ಕೋ, ಅಥವಾ ಬೇರೆ ಯಾರಾದ್ರೂ ಕೊಲೆ ಮಾಡಿರಬಹುದಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಈ ಪ್ರಕರಣ ಕುಲಗೋಡ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ತನಿಖೆಯ ಬಳಿಕವೇ ಸತ್ಯಾಸತ್ಯತೆಗಳು ಬೆಳಕಿಗೆ ಬರಬೇಕಿದೆ.