Kshetra Samachara

Local News Subject: 
ಪಕ್ಷಿಕೆರೆ: ಮರ ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತ; ಸ್ಥಳೀಯರಿಂದ ತೆರವು
City: 
Udupi
Mangalore
Video Thumbnail: 
PublicNext--512899--node-nid
Category: 
Infrastructure
Body: 

ಮುಲ್ಕಿ: ಪಕ್ಷಿಕೆರೆ ಸಮಿಪದ ಶೀನಪ್ಪಯ್ಯನ ಕೋಡಿ (ಎಸ್ ಕೋಡಿ) ಬಳಿ ಇಂದು ಬೃಹತ್ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದು ಬಳಿಕ ರಸ್ತೆಗೆ ಅಡ್ಡವಾಗಿ ಬಿದ್ದ ಪರಿಣಾಮ ಕಿನ್ನಿಗೋಳಿ ಎಸ್ ಕೋಡಿ- ಹಳೆಯಂಗಡಿ ರಸ್ತೆ ಸಂಚಾರ ವ್ಯತ್ಯಯಗೊಂಡಿತು.

ಈ ಸಂದರ್ಭ ಕೂಡಲೇ ಕಾರ್ಯಪ್ರವೃತ್ತರಾದ ನಿವೃತ್ತ ಯೋಧ ಅಲ್ವಿನ್ ಡಿಸೋಜ ನೇತೃತ್ವದಲ್ಲಿ ಕೆಮ್ರಾಲ್ ಪಂಚಾಯಿತಿ ಸದಸ್ಯ ನವೀನ್, ಸುಧಾಕರ್ ಪುನರೂರು, ಪಂಚ ಸಾಲ್ಯಾನ್, ಕಮಲಾಕ್ಷ, ಕಿನ್ನಿಗೋಳಿ ಮೆಸ್ಕಾಂ ಸಿಬ್ಬಂದಿ ಮರ ತೆರವುಗೊಳಿಸಿದರು.

ಅಲ್ವಿನ್ ಡಿಸೋಜ ಮಾತನಾಡಿ, ಮರ ಬೀಳುವ ಕ್ಷಣ ಸ್ಕೂಟರ್ ಹಾಗೂ ಕಾರು ಸವಾರರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಈ ಪರಿಸರದಲ್ಲಿ ಒಳಚರಂಡಿ ಅವ್ಯವಸ್ಥೆಯಿಂದ ರಸ್ತೆಗೆ ಕೆಸರು, ಮರಳು ಮಿಶ್ರಿತ ನೀರು ಬರುತ್ತಿದ್ದು, ಅನೇಕ ಅಪಘಾತಗಳಾಗಿವೆ. ಈ ಬಗ್ಗೆ ಅನೇಕ ಬಾರಿ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದರು.

Reach Count: 
6927