Public News

News Subject: 
ದೆಹಲಿಗೆ ಯಾರೂ ಬರಬಾರದು ಅಂತಾ ಕಡಿವಾಣ ಹಾಕೋಕೆ ಆಗುತ್ತಾ.? ಆರ್. ಶಂಕರ್
Category: 
Politics
Body: 

ಯಾದಗಿರಿ: ಮೂಗು ಇರುವ ತನಕ ನೆಗಡಿ ತಪ್ಪಲ್ಲ,ಡೆಲ್ಲಿಗೆ ಯಾರು ಬರಬಾರದು ಅಂತ ಕಡಿವಾಣ ಹಾಕೋಕೆ ಆಗುತ್ತಾ ,ನಮ್ಮ ಪಕ್ಷದ ಕೇಂದ್ರ ಸ್ಥಾನ ಡೆಲ್ಲಿ ಹೀಗಾಗಿ ಒಬ್ಬ ರಾಜಕಾರಣಿಯಾಗಿ ಕೇಂದ್ರ ಸ್ಥಾನಕ್ಕೆ ಹೋಗ ಬಾರದಾ ಅಂತ, ಶಾಸಕ ಅರವಿಂದ್ ಬೆಲ್ಲದ ಡೆಲ್ಲಿಗೆ ತೆರಳಿದ ವಿಚಾರಕ್ಕೆ ಸಚಿವ ಆರ್ ಶಂಕರ್ ಸಮರ್ಥನೆ ನೀಡಿದ್ದಾರೆ.

ಯಾದಗಿರಿ ಸರ್ಕಿಟ್ ಹೌಸ್ ನಲ್ಲಿ ಈ ಬಗ್ಗೆ ಮಾತನಾಡಿದ ಅವರು, ಬೆಲ್ಲದ ನಡೆ ಸಮರ್ಥನೆ ಜೊತೆಗೆ ಸಿಎಂ ಯಡಿಯೂರಪ್ಪ ಪರ ಆರ್ ಶಂಕರ್ ಬ್ಯಾಟಿಂಗ್ ಮಾಡಿದರು. ಡೆಲ್ಲಿಗೆ ಹೋಗವರೆಲ್ಲಾ ಮುಖ ಮಂತ್ರಿ ಬದಲಾವಣೆಗೆ ಹೋಗೋದಾದ್ರೆ, ಒಬ್ಬ ರಾಜಕಾರಣಿ ಡೆಲ್ಲಿಗೆ ಹೋಗ ಬಂದಾಗಲೂ ಒಬ್ಬ ಮುಖ್ಯ ಮಂತ್ರಿ ಬದಲಾವಣೆ ಆಗಬೇಕು.ಡೆಲ್ಲಿಗೆ ಹೋಗೋದು ಅವರ ವಯಕ್ತಿಕ ಅದಕ್ಕೆ ರೆಕ್ಕೆ-ಪುಕ್ಕ ಕಟ್ಟಬೇಕಾಗಿಲ್ಲ ಅಂದರು. ಇನ್ನೂ ಎರಡು ವರ್ಷ ಯಡಿಯೂರಪ್ಪ ಅವರೇ ನಮ್ಮ ಮುಖ್ಯ ಮಂತ್ರಿ,ಮುಂದಿನ ಚುನಾವಣೆಗೂ ಸಹ ಅವರ ನಾಯಕತ್ವದಲ್ಲಿ ಹೋಗುತ್ತೆವೆ ಅಂತ ಭವಿಷ್ಯ ನುಡಿದರು.

Reach Count: 
39895