Kshetra Samachara

Local News Subject: 
ಕಲಘಟಗಿ: ಕೇಂದ್ರ ಸರಕಾರ ಇಂದನ‌ ಬೆಲೆ ದುಪ್ಪಟ್ಟು ಮಾಡಿದೆ: ಮಾಜಿ ಸಚಿವ ಸಂತೋಷ ಲಾಡ್
City: 
Hubballi-Dharwad
Category: 
Politics
Body: 

ಕಲಘಟಗಿ: ಕೇಂದ್ರ ಸರಕಾರದ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ಖಂಡಿಸಿ ಮಾಜಿ ಸಚಿವ ಸಂತೋಷ ಲಾಡ್ ಅವರ ನೇತ್ರತ್ವದಲ್ಲಿ ಪ್ರತಿಭಟನೆಯನ್ನು ಶನಿವಾರ ಮಾಡಲಾಯಿತು.

ಪಟ್ಟಣದ ಇಂಡಿಯನ್, ಎಚ್ ಪಿ ಪೆಟ್ರೋಲ್ ಪಂಪ್ ಹಾಗೂ ದಾಸ್ತಿಕೊಪ್ಪ ಪೆಟ್ರೋಲ್ ಪಂಪ್ ಗಳ ಹತ್ತಿರ ಕೇಂದ್ರ ಸರಕಾರದ ಧೋರಣೆಯ ವಿರುದ್ಧ ಲಾಡ್ ಅವರು ಹರಿಹಾಯ್ದರು.

ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರಕಾರ ಏಳು ವರ್ಷಗಳ ಅವಧಿಯಲ್ಲಿ‌ ಇಂದನ‌ ಬೆಲೆ ದುಪ್ಪಟ್ಟು ಮಾಡಿದೆ.ಯುಪಿಯ ಆಡಳಿತದ ಹತ್ತು ವರ್ಷಗಳ ಅವಧಿಯಲ್ಲಿ ಬ್ಯಾರಲ್ ಗೆ 100 ರೂಪಾಯಿಗೆ ಖರೀದಿಸುತ್ತಿತ್ತು.ಆದರೆ ಕೇಂದ್ರದ ಮೋದಿ ಸರಕಾರ ಬ್ಯಾರಲ್ ಗೆ 40 ರೂಪಾಯಿಗೆ ಖರೀದಿಸಿದರು.ಇಂಧವನ್ನು ಅಧಿಕ ಬೆಲೆಗೆ ಮಾರಾಟ ಮಾಡಿ ಜನರಿಗೆ ಅನಾನುಕೂಲ ಮಾಡುತ್ತಿರುವುದು ಏಕೆ ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ‌ಮುರಳ್ಳಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Reach Count: 
47032