Public News
News Subject:
ಬಸ್ ಚಾಲನೆ ವೇಳೆ ಚಾಲಕ ನಿದ್ರಿಸಿದರೂ ಅಪಘಾತವಾಗಲ್ಲ- ದಿಟ್ಟ ಹೆಜ್ಜೆ ಇಟ್ಟ ಕೆಎಸ್ಆರ್ಟಿಸಿ
Upload Image:
Category:
Infrastructure
Government
Body:
ಬೆಂಗಳೂರು: ಕೆಎಸ್ಆರ್ಟಿಸಿ ತನ್ನ ಪ್ರಯಾಣಿಕರ ಸುರಕ್ಷತೆಗೆ ದಿಟ್ಟ ಹೆಜ್ಜೆ ಇಟ್ಟಿದ್ದು, ಕೃತಕ ಬುದ್ಧಿಮತ್ತೆ ಆಧರಿಸಿ ಅಪಘಾತ ತಡೆಯಲು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲು ಮುಂದಾಗಿದೆ.
ಸಿಎಂಎಸ್, ಡಿಎಂಎಸ್ ಎಂಬ 2 ರೀತಿಯ ತಂತ್ರಜ್ಞಾನವನ್ನು 1044 ಬಸ್ಗಳಲ್ಲಿ ಅಳವಡಿಸಲು ಕೆಎಸ್ಆರ್ಟಿಸಿ ನಿರ್ಧರಿಸಿದೆ. ಈ ತಂತ್ರಜ್ಞಾನ ಅಳವಡಿಕೆಯಿಂದ ಚಾಲಕ ನಿದ್ರಿಸಿದರೆ, ಬಸ್ ರಸ್ತೆ ಬಿಟ್ಟು ಡಿವೈಡರ್ಗಳತ್ತ, ಬಸ್ ಬೇರೆ ವಾಹನಗಳತ್ತ ಹೋಗುವುದು ತಪ್ಪಲಿದೆ. ಬಸ್ ಸ್ವಲ್ಪ ನಿಯಂತ್ರಣ ತಪ್ಪಿದರೂ ಕೂಡಲೇ ಕಂಟ್ರೋಲ್ ರೂಮ್ಗೆ ಮಾಹಿತಿ ರವಾನೆಯಾಗಲಿದೆ. ಇದರಿಂದ ಅಪಘಾತ ರಹಿತ ಸಾರಿಗೆ ಸೌಲಭ್ಯ ಸೇವೆ ಲಭ್ಯವಾಗಲಿದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
Reach Count:
23005