Public News
ಬೆಳಗಾವಿ: ಕರೋನಾ ನಿಂಯತ್ರಣಕ್ಕೆ ರಾಜ್ಯದಲ್ಲಿ ವೀಕೆಂಡ್ ಕರ್ಫೂ ಜಾರಿಯಲ್ಲಿ ಬೆಳಗಾವಿ ನಗರದಲ್ಲಿ ಬೆಳಗ್ಗೆಯಿಂದಲೇ ಚನ್ನಮ್ಮ ವೃತ್ತ ಸೇರಿ ಪ್ರಮುಖ ರಸ್ತೆಯಲ್ಲಿ ವಾಹನಗಳಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ವೀಕೆಂಡ್ ಕರ್ಫೂ ಇದ್ದರು ನಿಯಮ ಮೀರಿ ರಸ್ತೆಯ ಮೇಲೆ ಬಂದ ಜ್ಯೋತಿಷಿನನ್ನು ಪೊಲೀಸರು ಫಜೀತಿ ಮಾಡಿದ್ದಾರೆ.
ಕರೋನಾ ನಿಂತ್ರಣಕ್ಕೆ ನಗರ ಪೊಲೀಸರು ಎಲ್ಲಡೆ ಬ್ಯಾರಿಕೇಟಿಂಗ್ ಹಾಕಿ ವಾಹನ ತಪಾಸಣೆ ನಡೆಸುತ್ತಿದ್ದಾರೆ.ಆದರೆ ಈ ವೇಳೆ ಪೂಜೆಗೆ ಅಂತ ಹೊರಟಿದ ಜ್ಯೋತಿಷಿ ಡಿಸಿಪಿ ವಿಕ್ರಮ ಅಮಟೆ ಅವರ ಕೈಗೆ ತಗಲಾಕೊಂಡಿದ್ದಾರೆ.
ವೀಕೆಂಡ್ ಲಾಕಡೌನ್ ಇರುವುದರಿಂದ ಅಗತ್ಯ ಸೇವೆಗಳಿಗೆ ಹೊರತುಪಡಿಸಿ ಉಳಿದ ಯಾವುದಕ್ಕೂ ಅವಕಾಶ ಇಲ್ಲ ಆದರೆ ಲಾಕ್ ಡೌನ್ ನಿಯಮ ಮೀರಿ ಪೂಜೆ ಮಾಡಲು ಹೊರ ಬಂದ ರಾಘವೇಂದ್ರ ಜ್ಯೋತಿಷ್ಯಾಲದ ಶ್ರೀನುವಾಸ ಭಟ್ ನಗರದ ಚೆನ್ನಮ್ಮ ವೃತ್ತದಲ್ಲಿ ಪೊಲೀಸರ್ ಕೈಗೆ ಸಿಕ್ಕು ಪರದಾಟ ನಡೆಸಿದ್ದಾರೆ.
ಡಿಸಿಪಿ ವಿಕ್ರಮ ಅಮಟೆ ಅವರು ನಗರದ ಚೆನ್ನಮ್ಮ ವೃತದ ಬಳಿ ತಪಾಸಣೆ ನಡೆಸುತ್ತಿದ್ದರು, ಆ ವೇಳೆ ಜ್ಯೋತಿಷಿಗೆ ವಿಕ್ರಮ ಅಮಟೆ ಅವರು ಸರಿಯಾಗಿ ಕ್ಲಾಸ್ ತೆಗೆದೊಕೊಂಡ ಬಳಕಿ ಜ್ಯೋತಿಷಿ ಯುಟರ್ನ್ ಹೊಡೆದು ರಾಯರೇ ನೀವು ಒಳ್ಳೆ ಕೆಲ್ಸಾ ಮಾಡ್ತಿದ್ದರೀ, ನಾನು ಮನೆಗೆ ಹೋಗಬೇಕು ಬಿಡೀ ಎಂದು ಜ್ಯೋತಿಷಿ ಮನವಿ ಬಳಿಕ ಡಿಸಿಪಿ ಅವರು ಜ್ಯೋತಿಷಿ ವಾಹನ ಬಿಟ್ಟು ಕಳುಹಿಸಿದ್ದಾರೆ.
ಇದೇ ವೇಳೆ ಸರ್ಕಾರಿ ಕಚೇರಿಗಳು ಬಂದ ಇದ್ದರು, ವಾಣಿಜ್ಯ ತೆರಿಗೆ ಇಲಾಖೆ ಸಿಬ್ಬಂದಿಗೂ ಸಹ ಡಿಸಿಪಿ ಅವರು ಬಿಸಿ ಮುಟ್ಟಿಸಿದರು. ಲಾಕ್ ಟೌನ್ ನಿಯಮ ಉಲ್ಲಂಘನೆ ಮಾಡಿದವರ ವಾಹನಗಳನ್ನು ಪೊಲೀಸರು ಸೀಜ್ ಮಾಡುತ್ತಿದ್ದಾರೆ.