Kshetra Samachara
Local News Subject:
ಕಲಘಟಗಿ: ಇಂಧನ ಬೆಲೆ ಏರಿಕೆ ವಿರೋಧಿಸಿ ಸೈಕಲ್ ತುಳಿದ ಮಾಜಿ ಸಚಿವ ಸಂತೋಷ ಲಾಡ್
City:
Hubballi-Dharwad
Category:
Politics
Body:
ಕಲಘಟಗಿ: ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ವಿರೋಧಿಸಿ ಮಾಜಿ ಸಚಿವ ಸಂತೋಷ ಲಾಡ್ ಸೈಕಲ್ ತುಳಿದು ತಮ್ಮ ಆಕ್ರೋಶ ಹೊರ ಹಾಕಿದರು.
ಇಂಧನ ಬೆಲೆ ಏರಿಕೆಯನ್ನ ಖಂಡಿಸಿದ ಅವರು ಪಟ್ಟಣದಲ್ಲಿನ ಪೆಟ್ರೋಲ್ ಪಂಪ್ನಲ್ಲಿ ಸೈಕಲ್ ಗೆ ಬೈಕ್ ಕಟ್ಟಿ ಸೈಕಲ್ ಓಡಿಸಿ ವಿಶೇಷವಾಗಿ ಪ್ರತಿಭಟನೆ ನಡೆಸಿದರು.
ಕೇಂದ್ರ ಸರಕಾರದ ಪೆಟ್ರೋಲ್ ಬೆಲೆ ಏರಿಕೆಯ ವಿರುದ್ಧ ಸೈಕಲ್ ತುಳಿದು ಅಣುಕ ಮಾಡಿ ಪ್ರತಿಭಟಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ,ಸುಧೀರ ಬೋಳಾರ,ಅಜಮತ್ ಜಹಗೀರದಾರ ಸೇರಿದಂತೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Reach Count:
29299