Kshetra Samachara
Local News Subject:
ಹುಬ್ಬಳ್ಳಿ: ಕಿಶನ್ ಬೆಳಗಾವಿ ಗೆಳೆಯರ ಬಳಗದ ಕಾರ್ಯಕ್ರಮಕ್ಕೆ ಡಿಸಿಪಿ ರಾಮರಾಜನ್ ಚಾಲನೆ
City:
Hubballi-Dharwad
Video Thumbnail:
Category:
Others
COVID
Body:
ಹುಬ್ಬಳ್ಳಿ: ಕಿಶನ್ ಬೆಳಗಾವಿ ಗೆಳೆಯರ ಬಳಗದ ವತಿಯಿಂದ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಡಿಸಿಪಿ ಕೆ.ರಾಮರಾಜನ್ ಹಾಗೂ ಎಸಿ ಗೋಪಾಲಕೃಷ್ಣ ಚಾಲನೆ ನೀಡಿದರು.
ಕಿಲ್ಲರ್ ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಘೋಷಣೆ ಮಾಡಿರುವ ಲಾಕ್ ಡೌನ್ ನಿಂದ ಸಾರ್ವಜನಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಜೀವನ ನಡೆಸುವುದು ಕಷ್ಟವಾಗಿದೆ ಈ ನಿಟ್ಟಿನಲ್ಲಿ ಯುವ ಉತ್ಸಾಹಿಗಳ ಇಂತಹ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದು ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ವಿದ್ಯಾನಗರದ ನೇಕಾರ ಕಾಲೋನಿಯಲ್ಲಿ ಕಿಟ್ ವಿತರಣೆ ಮಾಡಿ ಜನರಿಗೆ ಕೋವಿಡ್ ಬಗ್ಗೆ ಎಚ್ಚರ ವಹಿಸುವ ಕುರಿತು ಮಾಹಿತಿ ನೀಡಿದರು.
Reach Count:
35878